ಎದೆ ತುಂಬಿ ಬಂದಿತ್ತು

ಒಂದು ಸುಂದರ ಬಿದರಿನ ತೋಪು. ತೋಪಿನ ಒಳಗೆ ಪುಟ್ಟ ಮನೆ. ಮನೆಯ ಮುಂದೆ ಪುಟ್ಟ ಕೊಳ. ಕೊಳದ ಸೋಪಾನದಲ್ಲಿ ಪ್ರಕೃತಿಯ ಸೌಂದರ್‍ಯ ಸವಿಯುತ್ತ ಕವಿ ಕುಳಿತಿದ್ದ. ಕವಿ ಮನವು ಹಾಡಿದಾಗ ಬಿದಿರು ಬೊಂಬು ತನ್ನ ಹೃದಯದ ಖಾಲಿ ಜಾಗದಲ್ಲಿ ನಾದ ತುಂಬಿಕೊಂಡು ನಲಿಯುತ್ತಿತ್ತು. ಕವಿಯ ಹಾಡಿನ ನಾದ ಲಹರಿ ಜಲತರಂಗದಲ್ಲಿ ಒಂದಾಗಿ ಲೀನವಾಗುತಿತ್ತು. ಕೊಳದ ಕಟ್ಟೆಯಲ್ಲಿ ಕುಳಿತ ಹಕ್ಕಿ ಕವಿತೆ ತುಂಬಿದ ನೀರನ್ನು ಕುಡಿದು ಸಂತಸದ ಹಾಡನ್ನು ಹಾಡುತಿತ್ತು. ಕವಿಮನ ಒಮ್ಮೆ ಬರಿದಾಯಿತು. ಸ್ಫೂರ್‍ತಿ ಬತ್ತಿ ಮೋಡ ಕವಿಯಿತು. ಕೊಳದ ಹೃದಯದಿಂದ ಕಾರುಣ್ಯದ ಕವಿತೆಗಳು ತೇಲಿ ಬಂದವು. ಹಕ್ಕಿ ರೆಕ್ಕೆ ಬಡಿದು ಹಾಡತೊಡಗಿತು. ಪ್ರಕೃತಿಯ ವೃಂದಗಾನದಲ್ಲಿ ಕವಿಮನ ಸ್ವಾಂತ್ವನ ಪಡೆದು ಮುದ ಗೊಂಡಿತು. ಕವಿ ತುಂಬಿ ಕೊಟ್ಟಿದ್ದ ಕವಿತೆಗಳೆಲ್ಲ ಮತ್ತೆ ಎದೆತುಂಬಿ ನಲಿದು ಬಂದವು. ಬಿದಿರ ಭಾವಕ್ಕೆ, ಕೊಳದ ಕಾವ್ಯಕ್ಕೆ, ಹಕ್ಕಿಯ ನಲುಮೆಗೆ, ಕವಿ ಮಾರು ಹೋದ. ಪ್ರಕೃತಿಯಲ್ಲಿ ಒಂದಾದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶುದ್ಧ ಸುಳ್ಳಲ್ಲವೇ? ಯುದ್ಧದೊಳು ಗೆಲುವೇನು?
Next post ಕೃತಿ

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

cheap jordans|wholesale air max|wholesale jordans|wholesale jewelry|wholesale jerseys